ನನ್ನ ಕವನಗಳು

ಶ್ರಾವಣದ ಪ್ರೇಮಿಗಳು - ನೆಲದ ಋಣ

ನೆಲದ ಋಣವು ಇರುವ ತನಕ ಬದುಕಬೇಕು  ಜಲದ ರುಚಿಯ  ಅಳೆಯದಂತೆ ಕುಡಿಯಬೇಕು  ಗಂಗೆ ತಾನು ಪವಿತ್ರೆಯೆಂದು  ನಾವು ತಿಳಿದಿರಬೇಕು  ಭೂಮಿ ತಾಯಿಗೆ ನಾವು  ಅತಿಥಿಗಳೆಂಬುದನ್ನು ಅರಿಯಬೇಕು. ನೆಲದ ಋಣವು............ ಜೀವರಸವ ತುಂಬಿಕಳಿಸಿಹ  ಯಾತ್ರೆಗಾಗಿ ಎಂದು  ತನುವು ಮನವು ಧನವು ಕೂಡ  ಅವನದೇ ಎಂದು  ತಿಳಿಯ ಹೊರಟ ಮನಸಿನಾಳ  ಬಹಳ ಹಗುರವೆಂದು  ಮರೆಯದಂತೆ ನಾವು ಬಂದ  ಕೆಲಸವನ್ನು ಮುಗಿಸಬೇಕೆಂದು. ನೆಲದ ಋಣವು............... ಗಾಳಿ, ಬೆಳಕು, ನೀರನೆಲ್ಲ ನಮಗಾಗಿ ನೀಡಿರಲು  ಮರೆಯಬೇಕು ಕಷ್ಟಗಳನು  ಸುಖವು ಬಂದಿರಲು  ಪ್ರಕೃತಿಯ ಸೊಬಗನ್ನು  ಸವಿಯುತ್ತ ಕಳೆದಿರಲು  ಬದುಕಿಗೊಂದರ್ಥವಿರುವುದನ್ನು  ತಿಳಿಯುತಿರಲು. ನೆಲದ ಋಣವು................ ಭುವಿಯ ನಾಕ ಸಿಹಿಯ ಜೊತೆಗೆ  ಕಹಿಯ ನೀಡಿರಲು  ಹೆದರದಂತೆ ನಾಕ ನರಕಗಳನ್ನು  ಸಮನೆಂದು ಸ್ವೀಕರಿಸಿರಲು  ನೆಮ್ಮದಿಯ ಕ್ಷಣಗಳು  ಬದುಕಿನಲ್ಲಿ ತಾವಾಗೇ ಬರುತಿರಲು  ಅವಕಾಶಕ್ಕಾಗಿ ಕಾಯಬೇಕು  ನಮ್ಮ ಸರದಿ ಮುಂದಿರಲು. ನೆಲದ ಋಣವು............. ಬಾಳಿನ ಬೆಳಕಿಗಾಗಿ ಕೊಂಚ  ವಿರಮಿಸಲೇಬೇಕು  ಜೀವನವೊಂದು ಭಾಗ್ಯದೊಡಲೆಂದು  ಭಾವಿಸಲೇ ಬೇಕು. ಹಸುರಿನುಸಿರು ಬರುವುದೆಂಬ  ಕಾತರದ ನಿರೀಕ್ಷೆಯಲ್ಲಿರಬೇಕು  ಮುಕ್ತಿ ಮಾರ್ಗ...

ಶ್ರಾವಣದ ಪ್ರೇಮಿಗಳು - ಮೌನದಲೆ

ಮೌನದಲೆಯು 

ಮನದ ತುಂಬ 

ಸಂಧ್ಯಾರಾಗ ರಂಜನೆ 

ಎದೆಯ ತುಂಬ 

ನೆನಪುಗಳೆಲ್ಲಾ 

ಹಳೆಯದಾದ ಸರಕು 

ಸಂಜೆಯಲ್ಲಿ 

ಬೀಸಿಬಂದ ಮಂದಗಾಳಿ.

ಮೌನದಲೆಯು.......

ಚಂದ್ರ ನಗುತಿಹ 

ಬಾನಿನಲ್ಲಿ ಬೆಳಗುತ್ತ 

ರಾಗಮಾಲಿಕೆಯನ್ನು 

ಮೌನದಲ್ಲೇ ನೆನೆಸುತ್ತ 

ಚಡಪಡಿಸುತ್ತಿಹ 

ಮನಸು ಮಂದಸ್ಮಿತ

ವಿರಹ ಗೀತೆಯೊಂದು 

ತಾನಾಗಿ ಮೂಡುತ.


ಮೌನದಲೆ......

ಪ್ರೀತಿಯೆಂಬ 

ಕಮಲದ ಕಣ್ಣುಗಳು 

ಕಾಮನೆಯನ್ನು 

ಕಾಡುತಿರುವ ಹಣ್ಣುಗಳು 

ಗಾಳಿ ನೀರು ಎಲ್ಲೆ ಮೀರಿ 

ಜೇನು ಸುರಿಸಿಹೆ 

ಮೌನ ಮುರಿದು 

ಮತ್ತೆ ಹಾಡತೊಡಗಿದೆ.

ಮೌನದಲೆ......

ಹಳೆಯ ರಾಗ ಕೇಳಿಕೊಂಡೆ 

ಕಾಲವನ್ನು ಕಳೆದಿಹೆ 

ಹೊಸ ರಾಗವೊಂದನ್ನು 

ಮನಸು ಕೇಳುತ್ತಿಹೆ 

ಮುಕ್ತವಾದ ನೆಲೆಯ ತಟ 

ಸಂಕಟವೆಲ್ಲ ಮಾಯ 

ವಿಮಲ ಗಾಯನ 

ಪ್ರೀತಿಯಲ್ಲಿ ನಾದಮಯ.

ಮೌನದಲೆ.......

ತಂಪನೆರಚಿ ಗಂಧ 

ಪರಿಮಳವ ಘಮಿಸುತ್ತ


ಚೆಂದದಿಂದ ಚಂದ್ರ ನಕ್ಕ 

ಮೌನವನ್ನು ಮುರಿಯುತ್ತ 

ಮಂದಹಾಸ ಬೀರುತ್ತ 

ಶಂಕೆಯೆಂಬ ಬೆಂಕಿಯು 

ಉರಿದು ನರಳಿತು 

ತಂಪಿನಲ್ಲಿ ಲೀನವಾಗುತ್ತ.

ಮೌನದಲೆ.......

ಕಾಡ ತುಂಬ 

ಗಗನ ಕುಸುಮ ಅರಳಿರಲು 

ಒಲುಮೆಯಿಂದ 

ಕರೆಯುತಿಹುದು ಮುಗಿಲು 

ಬೆಳ್ಳಿ ಮೋಡದಾಟದಲ್ಲಿ 

ಚಂದ್ರ ಸುಖಿಸುತ್ತಿಹ 

ಬಿರುಗಾಳಿಯ ಚಿಂತೆಯಿಲ್ಲ 

ಎಲ್ಲ ಸುಪ್ತವಾಗಿರಲು.

ಮೌನದಲೆ......

    *************************************************


ಕಾಮೆಂಟ್‌ಗಳು